ಕೊಳಲು

ಅಂತ ಕರಣ ಒಸರಿಸಿದ
ರಸಪದದ ರಾಗ ಹರಿವ
ನದಿಯ ಜುಳು ಜುಳು
ಸಪ್ತಸ್ವರವಾದ ಸಪ್ತರ್ಷಿಮಂಡಲ
ಮಿನುಗು ಮಿಂಚು ರಸಭಾವ
ಎಲ್ಲ ತಲ್ಲಣಗಳ ದಾಟಿ
ಒಡಲಿಂದ ಒಡಲಿಗೆ ಸೇರುವ
ಅಂತರಂಗದ ಸಮುದ್ರ.

ವೃಷ್ಠಿ ಸಮಷ್ಠಿಯ ಮಂಗಳ ಹಾಸು
ಬೀಸಿದ ಹೃದಯದಲಿ ಶೀವನ ನಟುವಾಂಗ
ತಿಳಿಗಾಳಿಯ ಗುಂಟ ಹರಡಿ ಹಾಸಿ ಗಂಧ
ಪ್ರಣೀತ ಊದಿದ ಕೊಳಲು ಗಾನ ಹರಸಿ
ಸನ್ಮಾರ್ಗ ತುಂಬ ಚಿನ್ನದ ಗರಿಗಳು
ಹಸಿರು ಹಬ್ಬಿದ ಸಿರಿಬೋಗ ಮಳೆಹರಿದು
ಇಳಿದು ಬಂತು ಮೇಲಿನಿಂದ ಜೀವ ರಾಗ.

ಮನದೊಳಗೆ ಸೆಲೆಒಡೆದ ತೀವ್ರರಾಗ
ಹನಿಹನಿ ಇಬ್ಬನಿ ಮನದನಿಯಲಿ ಇಳಿದು
ಎದೆಯಿಂದ ಎದೆಗೆ ಕೊರಳಿನಿಂದ ಕೊರಳಿಗೆ
ಬಣ್ಣದೋಕುಳಿಯಾಡಿ ಮರಳಿ ಮುರಳಿಗಾನ
ಪ್ರೀತಿ ಹರಿದ ಹಕ್ಕಿಕೊರಳ ತುಂಬ ಇನಿಧ್ವನಿ
ಬಯಲು ತುಂಬ ಗಂಧರ್ವಲೋಕ ತನತನ
ಆತ್ಮಪರಮಾತ್ಮನ ಲೀನ ನಿವೇದನೆ ನಿನ್ನ ಹರವಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೮

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys